Saturday 16 April 2016

ಹೊಯ್ಸಳರ ಬೆನ್ನೇರಿ

ಇದು "ಹೋಯ್ಸಳ ಕರ್ನಾಟಕ ಬ್ರಾಹ್ಮಣ" ಸಮುದಾಯ. ಈ ಸಮುದಾಯದ ಹೆಗ್ಗುರುತು ಅದರ ಹೆಸರೇ ಆಗಿದೆ. ಈ ಹೆಸರಿನ ಮೊದಲನೆಯ ಪದ "ಹೋಯ್ಸಳ”. ಎಷ್ಟು ಜನರಿಗೆ ಈ ಪದದ ಪರಿಚಯ ಇದೆ ಅಂದರೆ, ಅದು ಹಾಸ್ಯಸ್ಪದವಾದ ಪ್ರಶ್ನೆ ಆಗುತ್ತದೆ. ಆದರೆ ಎಷ್ಟು ಜನರಿಗೆ ಈ ಪದದ ಆರ್ಥ ಗೊತ್ತಿದೆ, ಎಂದರೆ ಅದು ಸ್ವಲ್ಪ ಗಲಿಬಿಲಿಯ ಪ್ರಶ್ನೆ ಅನಿಸುತ್ಥದೆ.

ಹೊಯ್ಸಳ ಪದದ ಅರ್ಥ ಏನು? ಅದೇನು ಮಹಾ, ಅದು ಈ ನಾಡನ್ನು ಆಳಿದ "ಹೋಯ್ಸಳ" ವಂಶದ ಹೆಸರು. ಇದು ಎಲ್ಲರಿಂದ ಸಾಮನ್ಯವಾಗಿ ಬರುವ ಪ್ರತಿಕ್ರಿಯೆ. ಆದು ಸರಿ. ಪ್ರಶ್ನೆ ಮತ್ತೊಮ್ಮೆ ಓದಿ. ಪ್ರಶ್ನೆ  "ಹೋಯ್ಸಳ" ಪದದ ಅರ್ಥ ಏನು ಎಂದು. ಅದೇನು ಮಹಾ, ಹೋಯ್ಸಳರ ಇತಿಹಾಸದ ಪಾಠ ಓದಿಲ್ಲವೆ? ಸರಿ ಓದಿದ್ದೀವಿ. ಏನಿದೆ ಆದರಲ್ಲಿ? ಒಮ್ಮೆ ಜ್ನಾಪಿಸಿಕೊಳ್ಳಿ

ದಂತಕತೆಯ ಪ್ರಕಾರ ಜೈನ ಗುರು ಸುದತ್ತಚಾರ್ಯನು ಸೊಸೆಯೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ನಾಪಿಸಿದನು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ.

ಇಲ್ಲಿ "ದಂತಕತೆಯ ಪ್ರಕಾರ" ಎನ್ನುವುದನ್ನು ಗಮನಿಸಿ. ಇದು ದಂತ ಕಥೆಯಾ? ಇದು ಸೃಷ್ಟಿಯದದ್ದು ಎಲ್ಲಿಂದ?

೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ. ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು.

ಈ ಅನುಮಾನ ಯಾಕೆ? ಯಾಕೆಂದರೆ, ಹೊಯ್ಸಳ ಶಿಲ್ಪಗಳಲ್ಲಿ ಇರುವ ವ್ಯತ್ಯಾಸ (ಇದಕ್ಕೆ ಬೇಕಾದ ಚಿತ್ರಗಳನ್ನು ಈ ಬರಹದೋಂದಿಗೆ ಕೆಳಗೆ ನೀಡಲಾಗಿದೆ)







೧) ಮೊದಲನೆಯದು, ಹೋಯ್ಸಳರ ಲಾಂಛನದಲ್ಲಿರುವುದು ಹುಲಿಯೋ ಅಥವಾ ಸಿಂಹವೋ ಎಂಬ ಸಂದೇಹ.  ಕಥೆಯಲ್ಲಿ ಬರುವುದು (೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ) ಹುಲಿ. ಆದರೆ, ಬೇಲೂರಿನ ಮಂದಿರದ ಲಾಂಛನ ಕುತ್ತಿಗೆಯ ಸುತ್ತಾ ಸಿಂಹದ ಕೇಸರ ಇರುವಂತಿದೆ. ಆದರೆ ಬಸರಾಳುವಿನ ಮಂದಿರದಲ್ಲಿರುವ ವಿಗ್ರಹ ಹುಲಿಯನ್ನು ತೋರಿಸುತ್ತದೆ. ಹುಲಿಯ ಕುತ್ತಿಗೆಯಲ್ಲಿ ರಾಜ ವೈಭೊಗದ ಒಡವೆಗಳನ್ನು ಅಲಂಕರಿಸಿದಂತೆ ಇದೆ. ಆದ್ದರಿಂದ, ಹೋಯ್ಸಳ ಲಾಂಚನದಲ್ಲಿ ಇರುವುದು ಹುಲಿಯೇ ಎನ್ನುವುದು ವಾದ. ಅದು ಬಹುಶಹ ಅಲಂಕರಿಸಿರುವ ಹುಲಿ ಬರೀ ಹುಲಿಯಲ್ಲದೆ, ಅದು ಒಂದು ರಾಜ ಪ್ರಭುತ್ವವನ್ನು ಪ್ರತಿನಿಧಿಸುತ್ತದೆ.

೨)  ಬೇಲೂರಿನ ಮಂದಿರದ ಲಾಂಛನದಲ್ಲಿ ಸಳ ಬರೀ ಕತ್ತಿ ಅಥವಾ ಚೂರಿ ಹಿದಿದಂತೆ ಇದೆ. ಆದರೆ ಬಸರಾಳಿನ ವಿಗ್ರಹದಲ್ಲಿ ಸಳನ ಕೈಯಲ್ಲಿ ಗುರಾಣಿ ಇದೆ. ಗುರಾಣಿ ಇರುವುದರಿಂದ, ಸಳ ಯುದ್ದಕ್ಕೆ ಸನ್ನದ್ದನಾಗಿ ಬಂದಿರುವಂತೆ ತೋರುತ್ತದೆ. ದಂತಕತೆಯಲ್ಲಿರುವಂತೆ, ವಿದ್ಯಾಭ್ಯಾಸ ಮಾಡುತ್ತಿರುವಾಗ ನಡೆದ ಆಕಸ್ಮಿಕ ಘಟನೆ ಅದು ಅಲ್ಲ ಎಂದು ತಿಳಿದುಬರುತ್ತದೆ.

೩) ಹೋಯ್ಸಳ ದೋರೆ ವಿನಯಾದಿತ್ಯನ ಕಾಲದ್ದೆಂದು ತಿಳಿದುಬರುವ, ಚಿನ್ನದ ನಾಣ್ಯದಲ್ಲಿ ಹುಲಿಯ ಬದಲಿಗೆ ಶಾರ್ದೊಲ ಇರುವಂತೆ ತೋರುತ್ತದೆ. ಶಾರ್ದೋಲ ಹುಲಿಗಿಂತ ಶಕ್ತಿಯುತವಾದ ಪ್ರಾಣಿ ಎನ್ನುವುದು ದಂತಕತೆ. ಈ ಶಾರ್ದೂಲ ಕೆಳಭಾಗದಲ್ಲಿ ಇದ್ದು, ಅದನ್ನು ಒಂದು ಗಂಡಭೇರುಂಡ ಪಕ್ಷಿಯು ಮೆಟ್ಟಿ ನಿಂತತೆ ಇದೆ. ಶಾರ್ದೂಲ ಶಿವನನ್ನು ಮತ್ತು ಗಂಡಭೇರುಂಡವು ವಿಷ್ಣುವನ್ನು ಪ್ರತಿನಿಧಿಸುತ್ತವೆ ಎನ್ನುವುದು ಪುರಾಣದ ಮೂಲಕ ತಿಳಿಯುತ್ತದೆ. ಇದು ಸಾಂಧರ್ಭಿಕವಾಗಿ ಶೈವಾರಾಧಕರಾದ ಚೋಳರನ್ನೂ(ಶಾರ್ದೂಲ) , ಶ್ರೀ ವೈಶ್ಣವರಾದ ಹೋಯ್ಸಳರನ್ನೂ (ಗಂಢಭೇರುಂಢ) ಪ್ರತಿನಿಧಿಸುತ್ತದೆ. ಅಲ್ಲದೆ, ಚೋಳರ ಮೇಲಿನ ಹೋಯ್ಸಳರ  ವಿಜಯವನ್ನೂ ಪ್ರಮಾಣೀಕರಿಸುತ್ತದೆ.  ಗಂಢಭೇರುಂಢ, ಹೋಯ್ಸಳರಿಂದ ವಿಜಯನಗರಕ್ಕೂ, ಮೈಸೂರು ಅರಸರಿಗೂ ಹೋಗಿ, ಈಗ ಕರ್ನಾಟಕ ಸರ್ಕಾರದ ಮೋಹರಿನಲ್ಲಿದೆ.

೪) ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶವನ್ನು ಪ್ರಾಮುಖವಾಗಿ ಗಮನಿಸಬೇಕು. ಇದನ್ನು ಚೊಳರ ಕಾಲದ ಚಿನ್ನದ ನಾಣ್ಯಗಳಿಂದ ಸಾಧಿಸಲಾಗಿದೆ.

೫) ಹೋಯ್ಸಳರ ಉತ್ತುಂಗ, ವಿಶ್ಣುವರ್ಧನನ ಕಾಲದಲ್ಲಿ ಆಯಿತು. ಆದರೆ  ವಿಶ್ಣುವರ್ಧನನ  ಕಾಲದ ಚಿನ್ನದ ನಾಣ್ಯಗಳಲ್ಲಿ ಹುಲಿಯ ಗುರುತು ಇಲ್ಲದಿರುವುದು.

೬) ಸಳ, ವಂಶದ ಆದಿ ಪುರುಶನಾಗಿದ್ದರೆ ಅಥವಾ ಆತನಿಂದ ರಾಜ್ಯ ಸ್ತಾಪಿತವಾಗಿದ್ದರೆ, ಆತನ ಹೆಸರು ಶಾಸನಗಳಲ್ಲಿ ಉಲ್ಲೇಖವಾಗುತ್ತಿತ್ತು (ಇಕ್ಶ್ವಕು ವಂಶ, ಕದಂಬರ ಮಯೂರಶರ್ಮ ಇವರಂತೆ). ಆದರೆ ಸಳನ ಹೆಸರು ದಂತಕತೆಯನ್ನು ಬಿಟ್ಟು, ಬೇರೆಲ್ಲೋ ಪ್ರಸ್ಥಾಪ ಆಗಿಲ್ಲ.

ಈ ಎಲ್ಲಾ ಕಾರಣಗಳಿಂದ, "ಹೋಯ್ - ಸಳ”, ಹೋಯ್ಸಳ ಪದದ ಮೊಲ ಅಲ್ಲವೆನ್ನ ಬಹುದು. ಸಳನ ಕಥೆ, ದಂತಕಥೆ ಅನ್ನುವುದು ನಿಜದಂತೆ ತೋರುತ್ತದೆ.

ಆಂದರೆ, ಹೋಯ್ಸಳ ಪದದ ಆರ್ಥವೇನು?

ಸ್ವಲ್ಪ ಯೋಚಿಸಿ ನೋಡಿ. ನಿಮಗೆ ತಿಳಿಯುತ್ತದೆ. ಹೊಯ್ಸಳರು, ಚಾಳುಕ್ಯರ ಮತ್ತು ರಾಷ್ತ್ರಕೂಟ ದೋರೆಗಳ ಸಾಮಂತ ರಾಜರಾಗಿದ್ದವರು. ಅದಕ್ಕೆ ಹೋಲಿಸಿದರೆ, ಚೋಳರು ಬಹಳ ಪ್ರಭಾವಶಾಲಿ ದೋರೆಗಳು. ಚೋಳರನ್ನು ಸೋಲಿಸಿದ ಸಾಧನೆ, ಹೋಯ್ಸಳರನ್ನು ಸಾಮಂತ ಪದವಿಯಿಂದ ಸ್ವಾತಂತ್ರ್ಯ ರಾಜ್ಯ ಕಟ್ತುವ ವರೆಗೆ ಕೊಂಡೋಯ್ದಿತು. ಚೋಳರಿಗೆ ಸೋಲುಣಿಸಿದ ಸರದಾರನಿಗೆ, ಜನಸಾಮನ್ಯರು ಏನಂತಾ ಕರೆದಾರು?

"ಪೋಯ್ - ಚೋಳ". “ಪೋ" ಅನ್ನುವುದು ಕನ್ನಡದ ಪದ. "ಪೋಗಾದಿರೆಲೋ ರಂಗಾ....” ಕೇಳ್ಳಿದ್ದೀರಲ್ಲ? ಪೋ ಅನ್ನುವುದನ್ನು ಹೋಗು, ಕಳಿಸು, ಓಡಿಸು ಅನ್ನುವ ಆರ್ಥದಲ್ಲಿ ಬಳಸಲಾಗುತ್ತದೆ. "ಪೋಯ್ - ಚೋಳ" ಅಂದರೆ, ಚೋಳರನ್ನು ಓಡಿಸಿದವ ಎಂದರ್ಥ. ಆಡುಭಾಷೆಯಲ್ಲಿ, "ಪೋಯ್ - ಚೋಳ", “ಪೋಯ್ಚಳ" ಆಗುತ್ತದೆ. “ಪೋಯ್ಚಳ" “ಹೊಯ್ಸಳ" ಆಗಿದೆ.

ಇದೆಲ್ಲಾ, ಗೋತ್ತಿದ್ದಮೇಲೆ, ಸಳನ ದಂತಕತೆಯನ್ನು ಯಾಕೆ ನಮಗೆ ಇತಿಹಾಸ ಎಂದು ಈಗಲೂ ಬೋದಿಸುತ್ತಾರೆ? ಬಹುಶಹ, ಬ್ರಿಟಿಷರು ಅಧೀನದಲ್ಲಿದ್ದ ತಮಿಳು ಭಾಷಿಕರಾಗಿದ್ದ ಇತಿಹಾಸಕರರ ಪ್ರಭಾವ ಇರಬಹುದು (ಚೋಳರ ಲಾಂಚನದಲ್ಲಿ ಚಾಲುಕ್ಯರ ವರಾಹ ಇದೆ. ಇದನ್ನು ಈ ಇತಿಹಾಸಕಾರರು ಚೋಳರ ಪರಾಕ್ರಮ ಮೆರಸಲು ಬಳಸುತ್ತಾರೆ. ಆದರೆ ಅದೇ ರೀತಿ ಇರುವ ಹೋಯ್ಸಳರ ಲಾಂಚನದಲ್ಲಿ ಜಾಣ ಕುರುಡು ಪ್ರದರ್ಷಿಸಲಾಗುತ್ತದೆ). ಚೋಳರು ತಮಿಳಿಗರ ಹೆಮ್ಮೆ. ಆ ಹೆಮ್ಮೆಗೆ ಸಂಚಕಾರ ತಂದ ಹೋಯ್ಸಳರ ನಿಜವಾದ ಅರ್ಥ ವ್ಯಾಖ್ಯಾನ ಮಾಡುವುದು, ಅವರಿಗೆ ಮುಜುಗರದ ವಿಷಯವಾಗಿರಬಹುದು. ಆದ್ಧರಿಂದ, ಸಂಶೋದನೆಯ ನಿಜವನ್ನು ಮರೆಮಾಚಿ, ದಂತಕತೆಯನ್ನು ನಂಬಿಸಿ, ಕನ್ನಡಿಗರಿಗೆ ದ್ರೊಹಮಾಡಲಾಗಿದೆ.

"ಹೋಯ್ಸಳ" ಪದ ಮತ್ತು "ಹೋಯ್ಸಳರ ಲಾಂಛನ” , ನಿಜವನ್ನು ಸಾರಿ ಸಾರಿ ಹೇಳುತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಯಾವುದೋ ವಿದೇಷೀಯನ  ಪುಸ್ಥಕ ತೋರಿಸಿ ಭಂಡ ವಾದ ಮಾಡುವವರನ್ನು ಜನತೆ ತಿರಸ್ಕರಿಸಬೇಕು. ಇನ್ನಾದರೊ ಕನ್ನಡಿಗರು ಎಚ್ಚೆತ್ತು ಕೋಳ್ಳಬೇಕಿದಿ. ದಂತಕತೆಯನ್ನು ನಂಬಿಸಿ ಮತ್ತೆ ಮತ್ತೆ ಹೇಳುವುದು ದ್ರೋಹ ಬಗೆದಂತೆ. ಹೋಯ್ಸಳರ ಮನ್ನಣೆಯನ್ನು ಕಸಿದಂತೆ. ತಮಿಳು-ಕನ್ನಡ ಸಾಮರಸ್ಯ ಹಾಳಾಗುವ ಗುಮ್ಮ ಮುಂದಿಟ್ಟು, ನಿಜ ಮರೆಮಾಚುವ ಕಾರ್ಯಕ್ಕೆ ಇತಿಶ್ರೀ ಬರೆಯಬೇಕಿದೆ. "ಸತ್ಯಂ ಶಿವಂ ಸುಂದರಮ್" ಎಂಬ ವಾಖ್ಯ ನಂಬಿದ ಸಂಸ್ಕತಿ ನಮ್ಮದು. ಸತ್ಯವಾದದ್ದನ್ನು ಸಾಧಿಸಿ ತೋರಿಸಬೇಕು. ಹೋಯ್ಸಳ ಪದದಲ್ಲಿ, ನಮ್ಮ ಸಮುದಾಯದ ಹೆಮ್ಮೆ ಅಡಗಿದೆ. ಅದು ಬರೀ ನಮ್ಮ ಸಮುದಯದ ಹೆಮ್ಮೆ ಮಾತ್ರ ಅಲ್ಲ. ಅದು ಇಡೀ ಕನ್ನಡ ನಾಡಿನ ಹೆಮ್ಮೆ. ಈ ಹೆಮ್ಮೆ ಮತ್ತು ಮನ್ನಣೆ ಯನ್ನು  ಮತ್ತೆ ಪಡೆಯಬೇಕಿದೆ. ಕಷ್ಟಪಟ್ಟು ನಾಡು ಕಟ್ಟಿ ಆಳಿದ ಹೋಯ್ಸಳ ಸಾಮ್ರಾಜ್ಯಕ್ಕೆ ದೋರೆಯಬೇಕಾದ ಮನ್ನಣೆ ದೊರಕಿಸಬೇಕಾಗಿದೆ.

ಕನ್ನಡವನ್ನು ಆಡಿದಂತೆಯೇ ಬರೆಯುವುದು ವಾಡಿಕೆ. ಮತ್ತು ಬರೆದಂತೆಯೇ ಓದಲೂ ಬಹುದು. ಇದನ್ನು ಊಪಯೋಗಿಸಿ, ಚೋಳರ ಹೆಸರನ್ನೂ ಬಹುಶಹ ಸಂಶೋದಿಸಬಹುದು. ಇತಿಹಾಸಕಾರರ ಪ್ರಕಾರ ಚೋಳ ಶಬ್ದಕ್ಕೆ ಅರ್ಥ ಸಿಕ್ಕಿಲ್ಲ (http://www.cs.mcgill.ca/~rwest/wikispeedia/wpcd/wp/c/Chola_dynasty.htm).

 ತಮಿಳಿನಲ್ಲಿ, “ಲ" ಮತ್ತು 'ಳ" ಹಾಗೂ 'ಚ' ಮತ್ತು "ಛ' ಎರಡನ್ನೊ, ಒಂದೇ ರೀತಿ ಪರಿಗಣಿಸಲಾಗುತ್ತದೆ. ಚೋಳ ಬಹುಷಹ, "ಛಲ" ಇರಬೇಕು.  ಕನ್ನಡದಲ್ಲಿ ಛಲ ಅಂದರೆ, ಹಠ ಎಂದರ್ಥ. ಛಲಕ್ಕೆ ಬಿದ್ದು ರಾಜ್ಯ ಕಟ್ಟಿರಬಹುದಾದ್ದರಿಂದ, ಅವರು "ಛಲರು". ನಿವು ಪರಿಶಿಷ್ತರಾಗಿರುವ 'ಛಲವಾದಿ' ಸಮುದಾಯದ ಹೆಸರು ಕೇಳಿರಬೇಕು.

ಚೋಳರನ್ನು ಓಡಿಸಿದವರನ್ನು ಕನ್ನಡದವರು 'ಪೊಯ್ - ಛಲ' ಎಂದು ಗುರುತಿಸಿರಬೇಕು. "ಪೊಯ್ - ಛಲ" ಅಡುಮಾತಿನಲ್ಲಿ “ಪೊಯ್ಛಲ" ಆಗುತ್ತದೆ. ಇದರ ಬಗ್ಗೆ ಭಾಷಾಕಾರರು, ಇತಿಹಾಸಕರರು ಸಂಶೋದನೆ ನಡೆಸಿದರೆ ನಿಜ ಅರಿವಾಗಬಹುದು.

ಕಾವೇರಿಯ ಬೆನ್ನೇರಿ












ಬೇಸಿಗೆಕಾಲ ನೀರಿಗೆ ಕಷ್ಟ....ಕಾವೇರಿ ಇನ್ನು ಕಾವೇರುತ್ತದೆ. ಈ ಸಮಯದಲ್ಲಿ ಕನ್ನಡ - ತಮಿಳಿನ ಗುದ್ದಾಟ ಶುರುವಾಗುತ್ತದೆ. ತಮಿಳರನ್ನು ಓಡಿಸಿ ಕನ್ನಡೀಕರಣಗೊಳಿಸುವ ಕನ್ನಡ ಹೋರಾಟ ಬಹಳ ಹಳೆಯದು....ಇಲ್ಲಿದೆ ಅದರ ಒಂದು ಉದಾಹರಣೆ.

ಇವತ್ತು ಈ ಶ್ರೀಮುಖ(invitation) ಕಣ್ಣಾಡಿಸಿದಾಗ....ಒಂದು ಐತಿಹಾಸಿಕ ಸತ್ಯ ಕಾಣಸಿಕ್ಕಿತ್ತು.

 (ಈ ಶ್ರೀ ಮುಖ,ಸರ್ಕಾರದಿಂದ, ಸಾರ್ವಜನಿಕವಾಗಿ ಬಿಡುಗಡೆಗೊಳಿಸಿರುವ ಸರ್ಕಾರಿ ದಾಖಲೆ. ಜಿಲ್ಲಾಧಿಕಾರಿಗಳ ಸಹಿ ಮತ್ತು ಸರ್ಕಾರದ ಲಾಂಛನದಲ್ಲಿ ಬಿಡುಗಡೆ ಮಾಡಿರುವುದರಿಂದ ಅಧಿಕೃತ ದಾಖಲೆ. ಅದರಲ್ಲಿರುವ ವಿಷಯ ಕೂಡಾ ಸಾರ್ವತ್ರಿಕವಾಗಲೀ ಎಂದು ಈ ಬರಹ).

ಸ್ವಲ್ಪ ಜೂಮ್ ಮಾಡಿ ನೋಡಿ. ಚಿತ್ರದ ಮೇಲೆ ಎಡಭಾಗದಲ್ಲಿ...."ವೇಲಾಪುರಿ ನಿವಾಸ" ಅಂತಿದೆ. "ವೇಲು" ಎನ್ನುವುದು ತಮಿಳಿನ ಹೆಸರು. ವೇಲ್ ಅಂದರೆ ಭರ್ಜಿ. ವೇಲು ಎಂದರೆ ಕಾರ್ತಿಕೇಯ. ಬಹಷಃ ಚೋಳರಕಾಲದಲ್ಲಿ ಇಲ್ಲಿ ಮುರುಘನ ದೇವಸ್ಥಾನ ಇದ್ದು, ಹೆಸರು ವೇಲಾಪುರಂ ಅಂತ ಪ್ರಚಲಿತದಲ್ಲಿ ಇದ್ದಿರಬೇಕು. ಅಂದರೆ ಅದು ಶೈವ ಸ್ಥಳ.

ಇನ್ನೂಂದು ರೀತಿ ನೋಡಿದರೆ, ಭರ್ಜಿ ಹಿಡಿಯುತ್ತಿದ್ದ ಮಂದಿ ಬರುತ್ತಿದ್ದ ಊರು. ಅಂದರೆ ಸೈನಿಕರನ್ನು ಕೊಡುತ್ತಿದ್ದ ಊರು. ಹೊಯ್ಸಳರು ಇದನ್ನು ತಮ್ಮ ರಾಜಧಾನಿ ಮಾಡಿದ್ದನ್ನು ನೋಡಿದರೆ, ಇದು ಸೈನಿಕರನ್ನು ಮತ್ತು ಸಾಕಷ್ಟು ಧನಿಕರಿಂದ ಆಗಲೇ ತುಂಬಿದ ಪ್ರಮುಖ ಪಟ್ಟಣ ವಾಗಿರಬೇಕು. ಪುರೋಹಿತರು ದೇವರ ಹಳೆಯ ಶ್ಲೋಕವನ್ನೇ ಮುಂದುವರೆಸಿದ್ದಾರೆ.

ಹೋಯ್ಸಳರು "ವೇಲುಪುರಂ" ಗೆದ್ದಾಗ "ಪುರಿ" ಕನ್ನಡವಾಗಿ "ವೇಲೂರು" ಆಗಿದೆ. ಹೆಸರು ಇನ್ನೂ ತಮಿಳಿನದ್ದಾಗಿದ್ದರಿಂದ, ಅದು ಬೇಡವೆನಿಸಿ ತತ್ಸಮ-ತದ್ಬವ ರೂಪಾಂತರಿಸಿ, ಕನ್ನಡೀಕರಿಸಿದ್ದರಿಂದ ವೇಲೂರು  "ಬೇಲೂರು" ಆಗಿದೆ.

ನೆಲ, ಜಲ ಮತ್ತು ಭಾಷೆಗಾಗಿ ಹೊಯ್ಸಳರ ಈ ಹೋರಾಟ ಸುಮಾರು ಸಾವಿರವರ್ಷದ ಆಸುಪಾಸಿನದು. ತಮಿಳರ ಭಾಷೆ, ಸಂಸ್ಕೃತಿ ಮತ್ತು ಆಡಳಿತಾತ್ಮಕ ದಬ್ಬಾಳಿಕೆ ಸಹಿಸದೇ ಪಲ್ಲವರ ವಿರುದ್ಧ ಸಮರ ಸಾರಿ ಗೆದ್ದು ನಿಂತದ್ದು ಕದಂಬ ವಂಶ. ಅಲ್ಲಿ ಹುಟ್ಟಿದ್ದೇ ಕನ್ನಡನಾಡು. ಕನ್ನಡ-ತಮಿಳು ಸಂಘರ್ಷ ಅಲ್ಲಿಂದ ನಡೆದು ಬಂದಿದೆ. ಇದು ನಡೆದದ್ದು  ಸುಮಾರು ೧೫೦೦-೧೬೦೦ ವರ್ಷಗಳ ಕೆಳಗೆ.

ಬಹುಷಃ ಹೊಯ್ಸಳರು ರಾಜ್ಯಭಾರ ಮಾಡದಿದ್ದರೆ....ಸಂಪೂರ್ಣ ಹಳೇ ಮೈಸೂರು ಮತ್ತು ಕನ್ನಡದ ಜೀವನದಿ ಕಾವೇರಿ, ಕರ್ನಾಟಕದಲ್ಲಿ ಉಳಿಯದೆ ತಮಿಳುನಾಡುನಲ್ಲೇ ಇರುತ್ತಿತ್ತು.

ಸಾವಿರಾರು ವರ್ಷ ಹೋರಾಟದ ಇತಿಹಾಸ ಇರುವ, ಈ ಕನ್ನಡ ನೆಲಕ್ಕಾಗಿ, ಭಾಷೆಯ ಉಳಿವಿಗಾಗೆ, ಬೆಳವಣಿಗೆಗಾಗಿ ಹೋರಾಡಿ ಮಡಿದ ಜನರನ್ನು ನೆನೆದು, ಗೌರವಿಸಿ .....ಇಂದಿನಿಂದಲಾದರೂ "ಗಾಂಚಾಲಿ ಬಿಡಿ...ಕನ್ನಡಮಾತಾಡಿ".

ಕನ್ನಡನಾಡಿನ ಗುರತು (identity) ಇರುವುದೇ ಅದರ ಭಾಷೆ, ಸಂಸ್ಕೃತಿ, ವಿಶಿಷ್ಟವಾದ ಜನರ ನಡೆ, ನುಡಿ ಮತ್ತು ಪರಿಸರದಿಂದ. ನಾಡು ಹುಟ್ಟಿದ್ದೇ ಈ ಗುರುತನ್ನು ಉಳಿಸಿ ಸಂರಷಿಸುವುದಕ್ಕೋಸ್ಕರ. ಇದನ್ನು ಭಾಷಾವಾರು ಪ್ರಾಂತ್ಯ ಮಾಡಿದಾಗಲೇ, ಸಾಂವಿಧಾನಿಕವಾಗಿ ಒಪ್ಪಲಾಗಿದೆ. ಇದು ಇತಿಹಾಸವಲ್ಲದೇ ಇಂದಿಗೂ ಪ್ರಸ್ತುತ.

ಕನ್ನಡನಾಡಿನ ಮೇಲೆ ಬರೀ ತಮಿಳು ಹೇರಿಕೆಮಾತ್ರ ಆಗಿಲ್ಲ. ಸಂಸ್ಕೃತ, ತೆಲಗು, ಪರ್ಷಿಯನ್, ಇಂಗ್ಲೀಷ್, ಫ್ರೆಂಚ್ ಹೇರಿಕೆ ನಡೆದವು. ಅದರ ಮುಂದಿನ ಭಾಗವಾಗಿ ಇಂದು ಹಿಂದಿ, ಇಂಗ್ಲೀಷ್ ನ ಹೇರಿಕೆಯ ಪ್ರಯತ್ನ ನಡೆದಿದೆ. ಆದ್ದರಿಂದಲೇ ಇದು ಪ್ರಸ್ತುತ (ಹೊಸದಾಗಿ ನಿರ್ಮಾಣವಾಗುತ್ತಿರುವ ಮೆಟ್ರೂ, ಎಟಿಮ್, ಶಾಪಿಂಗ್ ಮಾಲ್ , ಸಿನಿಮಾ , ಮಿಡಿಯಾ ಗಳಲ್ಲಿನ ಭಾಷೆ, ಸಂಸ್ಕೃತಿ ಗಮನಿಸಿ).

ಕನ್ನಡಿಗರು ಈ ಹೆರಿಕೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಷ್ಟು ಪ್ರಶಾಸನದ ಅಂಗವಾಗಿ ನಡೆದ ದಬ್ಬಾಳಿಕೆಯ ನಂತರವೂ ಭಾಷೆ ಸಂವೃದ್ದವಾಗಿ ಉಳಿದಿರುವುದನ್ನು ನೋಡಿದರೆ, ಈ ಹೂರಾಟದಲ್ಲಿ ಕನ್ನಡಿಗರೇ ಗೆದ್ದಿರುವುದು ರುಜುವಾತಾಗುತ್ತದೆ.

ಈ ಹೋರಾಟ ಯಾವ ರೀತಿ ನಡೆಯಿತು ಅನ್ನುವುದನ್ನು ಜನ ಅರ್ಥಮಾಡಿಕೊಳ್ಳಬೇಕು. ಹೋರಾಟ ಅಂದರೆ ತಮಿಳರ ಜೂತೆ ಅಥವಾ ದಬ್ಬಾಳಿಕೆಯ ಸರ್ಕಾರದ ವಿರುದ್ಧ ರಕ್ತಪಾತದ ಹೂರಾಟ ಅಲ್ಲ. ಭಾಷೆ, ಪ್ರಾಂತ್ಯ ಮತ್ತು ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸುವುದನ್ನು ಅರಿತ ಆ ಮಂದಿ ಅದಕ್ಕೆ ವಿರುದ್ಧವಾಗಿ ಅದೇ ಭಾಷೆ, ಸಂಸ್ಕೃತಿ ಮತ್ತು ಪ್ರಾಂತ್ಯವನ್ನು ಶ್ರೀಮಂತ ಗೂಳಿಸುವ ಕಾರ್ಯಕ್ಕೆ ತೂಡಗಿಸಿಕೊಂಡರು. ಆದ್ದರಿಂದಲೇ ಹೂಯ್ಸಳರ ಶಿಲ್ಪಕಲೆ, ನಾಟ್ಯ, ಸಂಗೀತ ಇಂದಿಗೂ ಗೋಚರಿಸುವುದು. ಇದು ಶ್ರೀಮಂತವಾಗಿದ್ದ ,ದೊಡ್ಡದಾಗಿದ್ದ.  ಹಾಗೂ ಹೆಸರುವಾಸಿಯಾಗಿದ್ದ ತಮಿಳರ ದೇವಸ್ಥಾನಗಳನ್ನು ಕ್ವಾಲಿಟಿಯಲ್ಲಿ ಮೀರಿಸಿಲು ನಿರ್ಮಿಸಿದ್ದು. ಕನ್ನಡ ಭಾಷೆ, ಹಳೆಗನ್ನಡದಿಂದ ಹೂಸ ಗನ್ನಡಕ್ಕೆ ಬರಲು ಇದೇ ಕಾರಣ. ಅತ್ಯತ್ಕೃಷ್ಟ ಕನ್ನಡ ಸಾಹಿತ್ಯ ರಚನೆ ನಡೆದದ್ದು ಹೋರಾಟಕ್ಕಾಗಿಯೇ.

ದಬ್ಬಾಳಿಕೆ ಎರಡು ತರದಲ್ಲಿ ನಡೆಯುತ್ತಿತ್ತು. ಒಂದು ಕನ್ನಡಿಗರ ಅಭಿಮಾನವನ್ನು ಅಳಿಸುವುದು ಮತ್ತೂಂದು ಹೂರಗಿನ ಭಾಷೆ, ಸಂಸ್ಕೃತಿ, ರೀತಿ ರಿವಾಜುಗಳನ್ನು ಈ ಪ್ರಾಂತ್ಯದಲ್ಲಿ ಜಾರಿಗೂಳಿಸುವುದು. ಚೋಳರ ದೇವಸ್ಥಾನದಿಂದ, ಬಿಜಾಪುರದ ಗುಂಬಜ್ ವರೆಗೆ ಇದೇ ಕಾಣುವುದು. ಈ ಕಾಲದಲ್ಲಿ ಗಾಜಿನ ಗಗನಚುಂಬಿ ಸಾಪ್ಟವೇರ್ ಪಾರ್ಕ್ ಮತ್ತು ಇಂಗ್ಲೀಷ್ ಬಳಕೆ ಇದನ್ನೇ ತೋರಿಸುತ್ತದೆ. ಆದ್ದರಿಂದಲೇ ಈ ವಿಷಯ ಇಂದಿಗೂ ಅಷ್ಟೇ  ಪ್ರಸ್ತುತ.

ತೂಂದರೆ ಇರುವುದು ಇಂಗ್ಲೀಷ್ನಿಂದ. ಬೇರೆ ಭಾಷೆಗಳ ಆಕ್ರಮಣ ಮಾಡದನ್ನು ಇದು ಮಾಡಿದೆ. ಹಿಂದಿನಂತೆ ಸಂಘರ್ಷಿಸುವ ಬದಲು ಜನ ಹೋರಾಟ ಅಂದರೆ, ಕನ್ನಡ ತಮಿಳು ದಂಗೆ ಎಂದು ಅರ್ಥೈಸುವಂತೆ ಮಾಡಿವೆ ನಮ್ಮ ಎಡಪಂಥೀಯ ಮಾಧ್ಯಮಗಳು. ಅದಕ್ಕೂ ಬಗ್ಗದಿದ್ದರೆ, ಕನ್ನಡ ಹೋರಾಟ ದೇಶದ ಐಕ್ಯತೆಗೆ ಸಂಚಕಾರ ಅನ್ನುವಂತೆ ಬಿಂಬಿಸಲಾಗುತ್ತದೆ.

ಇಂಗ್ಲೀಷ್ ಬಳಸುವುದರಿಂದ ಆಗದ ಸಂಚಕಾರ ಭಾಷೆ, ಗಡಿ ಮತ್ತು ಸಂಸ್ಕೃತಿ ಉಳಿಸುವುದರಿಂದ ಆಗುತ್ತದೆ ಎಂದು ನಂಬುವಂತೆ ಮಾಡಿವೆ ಮಾಧ್ಯಮಗಳು.ಈ ಸುಳ್ಳು ಎಷ್ಟರಮಟ್ಟಿಗೆ ಇಂದು ಬೇರೂರಿದೆ ಎಂದರೆ ಹಿರಿಯರಾದ ತಾವು, ನನ್ನ ಬರವಣಿಗೆ ಕನ್ನಡ-ತಮಿಳು ಘರ್ಷಣೆಗೆ ಕಾರಣವಾಗಬಹುದು ಎಂದು ತಕ್ಷಣ ಅನಿಸುವಷ್ಟು.

ತಮಿಳುನಾಡಿನ ಊರಿನ ಹೆಸರನ್ನು ಕನ್ನಡದಲ್ಲಿ ಬರೆಯಿರಿ ಅಂತ ನಾನು ಹೇಳುತ್ತಿಲ್ಲ. ಕನ್ನಡನಾಡಿನಲ್ಲಿ ಕನ್ನಡ ಬಳಸಿ ಎಂದು ಹೇಳುತ್ತಿರುವುದು. ಬ್ಯಾಂಗಲೂರ್ ಬೆಂಗಳೂರು ಆಗಬೇಕಿದೆ. ಇದನ್ನು ನಮ್ಮ ಕನ್ನಡದವರು ಮಾಡಬೇಕಿದೆ. ಕನ್ನಡವನ್ನು, ಕನ್ನಡನಾಡಿನ ಪರಿಸರವಾದ ನದಿ, ಕಾಡು, ಪ್ರಾಣಿ ಇವುಗಳನ್ನು ಕನ್ನಡಿಗರು ಉಳಿಸಿ, ಬೆಳಸಿ ಶ್ರೀಮಂತಗೂಳಿಸುವುದೇ ಈ ದಬ್ಬಾಳಿಕೆ ಇರುವ ಪರಿಹಾರ.

ಕನ್ನಡನಾಡಿಗೆ ತಮಿಳು ಆಕ್ರಮಣ ಆಗಿತ್ತಾ? ಅದು ಆಗಿದ್ದರೆ ಬಹುಷಃ ಕನ್ಡನಾಡಿನ ಗಡಿ ಹತ್ತಿರ ಆಗಿರಬೇಕು. ತಲಕಾಡಿನಲ್ಲಿ ನಡೆದ ಯುದ್ಧ ಗೂತ್ತು, ಆದರೆ ಹಾಸನ ಮಲೆನಾಡು, ಉತ್ತರಕನ್ನಡದ ತನಕ ತಮಿಳರು ಬಂದಿದ್ದರೆ?



1) kadamba branch or ganga branch could have been "mandalika" for bigger Chola kingdom. That makes the region still chola empire. Kadambas started by snatching land from pallavas. So Tamil rule was there in core Kannada heartland before kadambas itself.

2) As Hoysalas reconstructed Beluru town, especially as their capital (That too as Vaishnava center), Old and dillipated Chola temple might have been demolished. This is a question ASI could investigate.

3) But Belur was Velupuri as specified in the present invitation. "Velu" is a definite Tamil word. The town has transformed from Shivic, Tamil influence to Vaishnavic, Kannada can be established clearly with this background.

4) Maddur Narasimha, Nagamangala Chenna Keshava (Big temple), Some Mysore region (For ex nanjangudu, but renovated by many kings) definitely proove chola presence. Many Hasan temples prior to Hoysalas have Chola architecture. Look at Shiva temples, you will see Proof of Chola. Madduru narasimha and Nagamangala Chenna Keshava are noteworthy, as they are vaishnava temples under Cholas. Chola kings were Shiva worshippers.


Tamil kingdoms flourished on Kaveri. River kaveri is basic (like bread and butter). The river fed agriculture which was the foundation for economy. Bonus came from marine trade, which was based on artisan skill. Kepping cauvery (and it's head, kodagu) was central point for Tamil kings strategy. They relentlessly tried to keep it in their influence. The temples constructed in Mysore area are the investments done for this strategy. It is nit just temples, but significant development work like building tanks, education, towns, roads, judicial systems were done to attract population and their loyalty. Against this odds kannadigas fought and retained cauvery under their control. Gangas showing loyalty with Rastrakutas than subjugating to Cholas or pallavas (marriage show an equal status, not subjugation) again shows this historical fight and deep commitment to retain Kannada identity and freedom from foreign influence.


Another view is that Belur was under Kadambas for some time. Here is a snippet from George Moraes book on Kadambas

Before Cholas, Gangas ruled the area. What is the town called at that time, i do not know. Let us call it as X. But when Cholas annexed, the town was renamed as Velupuri. How can we say this? We can say this because, only cholas defeated gangas and gangas were using Kannada as language (evident from inscriptions at shravana belahola).

There are many possibilities why it is named as velupuri

1) Kanchi was an authority seat of learning in south. People knowing reading and writing can have influence from Tamil. Town could be named as Velupuri in recognition of a person or a deity in tamilnaadu, even during ganga time. So velu temple may not be a precursor.

2) Velupuri could also mean town of soldiers, prime weapon of soldiers at that time was Vel. This is because, iron was a premium item and couple of vel can be done in place of one sword. So town could be named after soldiers (like we name cantt rail points). Again velumurugha may not be a precursor.

3) Looking at Bangalore NAL, a someshwara temple was found. Indicating the place to be a shivic town. Hassan Beluru has other temples that are fallen down. I do not have history of them

4) Tamil copper plates were found throughout erstwhile Chola kingdom stating grant of land to temples. Your saying that, no Tamil inscription found at beluru is an assumption and not truth. ASI is not transparent and has not made their publications online. Atleast I could find a Tamil copperplate dating to vijaynagar time in Bangalore region. Note Tamil script during vijaynagar time and place of temple is old Mysore. This could be because the priest at the temple may be a Tamil person. Although people may not read, He could show it as a grant right.

5) You are separating Bangalore, Mysore and Hassan. But from Ganga time, Bangalore, Tumkur, Mysore, Mandya,Kodagu and Hasan were together as Ganganaadu. They are together, as river tributaries in these region finally becomes kaveri. So a Tamil influence in Bangalore implies a strong pattern in Hassan also. That is the reason, I gave Bangalore example

What is important is that, Velupuri changed its name to Belur during Hoysala reign. Hoysalas derived their existence by opposing cholas. This is the reason or story behind Hoyasala logo, which is suspected to be born to indicate slaying of cholas (the tiger indicating chola might). With that background, it explains why Hoysalas would rename the town (which they made as their capital).

By the way, the town name as Beluru is interpreted from Hoysala Inscriptions at Channakeshava temple at hasan beluru and at NAL beluru. NAL beluru temple is confirmed to be a chola temple due to its architecture and period. Halebeedu is interpreted as Dwarasamudra from hoysala inscriptions. So Beluru was Beluru from Hoysala time. The literary derivation of Veluru is interpreted because the Tamil priests (vaishnavas) maintained it that way due to their affinity with Tamil.

In my view, it is a disgrace to refer channakeshava as "velupuri nivasa". Town, Temple and deity being constructed as a memory of winning war on Cholas and their Tamil traditions.

"Velaapuri" comes  in  many old  Kannada references  also. Many  of you  might  have  heard  the  song  " Aluvudethako Ranga, attharanjipa  gumma ... "    The  last few  lines  are : "Varada Vellaapuriya doreye Chennigarayaa ,  sharanara kaayuva karunaadhiye Varada Purandara   Vitthala  raayaaa"

ಬೇಲ ದ ಊರು ಬೇಲೂರು ಆಗಿರಬಹುದು

ಬೇಲದಹಣ್ಣು ಇದು ಶುದ್ಧ ಕನ್ನಡವೇ ತಾನೆ...
ಅದಕ್ಯಾಕೆ ವೇಲು ...ಎಂಬ ತಮಿಳು ಪದಕ್ಕೆ ತಾಳೆ ಹಾಕಬೇಕು.......
ಹೀಗೆ ಎಲ್ಲಕ್ಕೂ ಬೇರೆ ಭಾಷೆಯ ಹೆಸರನ್ನು ಉಲ್ಲೇಖಿಸಿ ತಾಳೆ ಮಾಡುತ್ತಾ ಬಂದರೆ ಎಲ್ಲವೂ ಬೆಳಗಾವಿ ಮಾದರಿ ಸಮಸ್ಯೆಗೆ ಬರುತ್ತವೆ....

 I am not demeaning Kannada kings. On the contrary, trying to convey that, existing public knowledge does so.

Please go through the link below.

http://m.thehindu.com/features/friday-review/history-and-culture/chronicles-of-the-past-in-copper/article70517.ece

The chola royal emblem has a boar on lower portion. It indicates dominance of cholas on chalukyas (artical says so). It indicates subjudigation of whole chalukya empire under chola kingdom. Hope it decisdively answer your question of dominanation on karnataka